ರಾಜ್ಯದಲ್ಲಿ ವರುಣನ ಆರ್ಭಟ ಇಂದೂ ಮುಂದುವರಿಯಲಿದೆ. ಕರಾವಳಿ ಹಾಗೂ ಒಳನಾಡು ಸೇರಿದಂತೆ 21 ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಕೋಲಾರ, ರಾಮನಗರ, ಮೈಸೂರು, ತುಮಕೂರು, ಬೆಂಗಳೂರು, ಬೆಂ.ಗ್ರಾಮಾಂತರ, ಹಾಸನ, ದಾವಣಗೆರೆ, ಚಿತ್ರದುರ್ಗ, ಉಡುಪಿ, ಉ.ಕನ್ನಡ, ದ.ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಕೊಪ್ಪಳ ಸೇರಿ ಹಲವು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಇನ್ನು, ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-20 , ಮಂಗಳೂರು: 28-24 , ಶಿವಮೊಗ್ಗ: 31-21, ಬೆಳಗಾವಿ: 28-21 , ಮೈಸೂರು: 28-21, ಮಂಡ್ಯ: 29-21, ಕೊಡಗು: 25-18, ರಾಮನಗರ: 28-21, ಹಾಸನ: 27-19, ಚಾಮರಾಜನಗರ: 28-21, ಚಿಕ್ಕಬಳ್ಳಾಪುರ: 28-20, ಕೋಲಾರ: 28-21,ತುಮಕೂರು: 29-21, ಉಡುಪಿ: 29-24, ಕಾರವಾರ: 29-25, ಚಿಕ್ಕಮಗಳೂರು:27-19, ದಾವಣಗೆರೆ: 30-22, ಚಿತ್ರದುರ್ಗ: 29-21, ಹಾವೇರಿ: 30-22, ಬಳ್ಳಾರಿ: 32-23, ಗದಗ: 30-22, ಕೊಪ್ಪಳ: 31-23, ರಾಯಚೂರು: 32-23, ಯಾದಗಿರಿ: 32-24, ವಿಜಯಪುರ: 30-23 , ಬೀದರ್: 30-22, ಕಲಬುರಗಿ: 32-23, ಬಾಗಲಕೋಟೆ: 31-23 ಡಿಗ್ರಿ ಸೆಲ್ಸಿಯಸ್ ಇರಲಿದೆ.