ರಾಜ್ಯ ಸರ್ಕಾರ ಮದುವೆಯಾಗುವವರಿಗೆ ಶುಭ ಸುದ್ದಿ ನೀಡಿದ್ದು, ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿ, ಬಡವರು ಮತ್ತು ಹಿಂದುಳಿದವರಿಗೆ ನೆರವಾಗಲು ಮುಜರಾಯಿ ಇಲಾಖೆ ಈಗಾಗಲೇ ಸಪ್ತಪದಿ ಯೋಜನೆಯನ್ನು ಜಾರಿಗೊಳಿಸಿದ್ದು, ಈಗ ಸಪ್ತಪದಿ ಮಾದರಿಯಲ್ಲೇ ಸಮಾಜ ಕಲ್ಯಾಣ ಇಲಾಖೆಯಿಂದ ‘ಶುಭಲಗ್ನ’ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಹೌದು, ಶುಭಲಗ್ನ ಯೋಜನೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯದವರ ವಿವಾಹಕ್ಕೆ ನೆರವಾಗಲಿದ್ದು, ಶೀಘ್ರದಲ್ಲೇ ಯೋಜನೆ ಜಾರಿಗೊಳಿಸಲು ಸರ್ಕಾರ ಉತ್ಸಾಹ ತೋರಿದ್ದು, ಸುಮಾರು 28 ಲಕ್ಷ ಕುಟುಂಬಗಳಿಗೆ ಇದರ ಲಾಭ ಸಿಗಲಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.